(ಪೈಗಂಬರರೇ ಹೇಳಿರಿ,) ಈ ನಾಡನ್ನು ಆದರಣೀಯಗೊಳಿಸಿದ ಇದರ ಪ್ರಭುವಿನ ಆರಾಧನೆ ಮಾಡಬೇಕೆಂದು ನನಗೆ ಅಪ್ಪಣೆ ಕೊಡಲಾಗಿದೆ35. ಸಕಲ ವಸ್ತುವೂ ಅವನದ್ದು. ನಾನು ಮುಸ್ಲಿಮರ ಕೂಟಕ್ಕೆ ಸೇರಬೇಕೆಂದೂ ಖುರ್ಆನನ್ನು ಓದಿ ಹೇಳಬೇಕೆಂದೂ ಆಜ್ಞಾಪಿಸಲ್ಪಟ್ಟಿದ್ದೇನೆ. ಆದ್ದರಿಂದ ಯಾರು ಸನ್ಮಾರ್ಗವನ್ನು ಸ್ವೀಕರಿಸುತ್ತಾನೆ, ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗವನ್ನು ಸ್ವೀಕರಿಸುವನು. ಯಾರು ಪಥಭ್ರಷ್ಟನಾಗುವನೋ ಅವನೊಡನೆ, ‘ನಾನು ಎಚ್ಚರಿಕೆ ನೀಡುವವನು ಮಾತ್ರ’ ಎಂದು ಹೇಳಿರಿ.