ನಿಜವಾಗಿಯೂ ಅಲ್ಲಾಹನು ನಿಮಗೆ ನಿಷಿದ್ಧ ಗೊಳಿಸಿರುವುದು ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹು ಅಲ್ಲದವರ ನಾಮ ಉಚ್ಛರಿಸಲ್ಪಟ್ಟದ್ದನ್ನು. ಆದರೆ ಯಾರಾದರೂ (ತಿನ್ನಲು) ನಿರ್ಭಂಧಿತನಾದರೆ, ಅವನು ಅದರ ಅಪೇಕ್ಷೆ ಇಲ್ಲದವನೂ ಮೇರೆ ಮೀರದವನೂ ಆಗಿದ್ದರೆ, ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.