ಅವರ ಸರಂಜಾಮುಗಳನ್ನು ಕಟ್ಟಿ ಅವರನ್ನು ಯಾತ್ರೆಗೆ ಅಣಿಗೊಳಿಸಿದಾಗ ಯೂಸುಫರು ಹೀಗೆ ಹೇಳಿದರು, ‘ನಿಮ್ಮ ಮಲ ಸಹೋದರನನ್ನು ನನ್ನ ಬಳಿಗೆ ಕರೆತರಬೇಕು. ನಾನು ಧಾನ್ಯಗ ಳನ್ನು ಕೊಂಡುಹೋಗಲು ಬರುವ ಪ್ರತಿಯೊಬ್ಬರಿಗೆ ನೀತಿಪೂರ್ವಕವಾಗಿ ಆಹಾರ ಧಾನ್ಯ ಗಳನ್ನು ಅಳತೆ ಪಾತ್ರೆ ತುಂಬಿ ಹಂಚುತ್ತಿರುವುದು ನೀವು ಗಮನಿಸುತ್ತಿಲ್ಲವೇ? ಅಲ್ಲದೆ ನಾನು ಎಷ್ಟು ಉತ್ತಮ ಅತಿಥೇಯನಾಗಿದ್ದೇನೆಂಬುದನ್ನೂ ಕಾಣುತ್ತೀರಲ್ಲವೆ?’