(ಓ ಪೈಗಂಬರರೇ,) ಶಿಕ್ಷೆಯು ಬಂದೆರಗುವ ಆ ದಿವಸದ ಬಗ್ಗೆ ನೀವು ಜನರಿಗೆ ಎಚ್ಚರಿಕೆ ಕೊಡಿರಿ. ಆಗ ಅಕ್ರಮಿಗಳು, ‘ಓ ನಮ್ಮ ಪ್ರಭೂ, ನಮಗೆ ಇನ್ನೂ ಕೊಂಚ ಕಾಲಾವಕಾಶವನ್ನು ಕೊಟ್ಟು ಬಿಡು. ಹತ್ತಿರದ ಒಂದು ಅವಧಿಯವರೆಗೆ ನಮಗೆ ನೀನು ಸಮಯವನ್ನು ಮುಂದೂಡು. ನಾವು ನಿನ್ನ ಕರೆಗೆ ಓಗೊಡುವೆವು ಮತ್ತು ಸಂದೇಶವಾ ಹಕರನ್ನು ಅನುಸರಿಸುವೆವು’ ಎನ್ನುವರು. ನಿಮಗೆ ಯಾವುದೇ ಸ್ಥಳಾಂತರವಿಲ್ಲವೆಂದು ಇದಕ್ಕೆ ಮುಂಚೆ ನೀವು ಆಣೆ ಹಾಕುತ್ತ ಹೇಳುತ್ತಿದ್ದಿರಲ್ಲವೇ?