ಅವರು ಹೇಳಿದರು. ಓ ನನ್ನ ಜನಾಂಗ ಬಾಂಧ ವರೇ, ನೀವೇ ಯೋಚಿಸಿರಿ, ನಾನು ನನ್ನ ಪ್ರಭು ವಿನ ಕಡೆಯಿಂದ ಒಂದು ಸ್ಪಷ್ಟ ಆಧಾರ ಪ್ರಮಾಣ ವನ್ನು ಅವಲಂಬಿಸಿದವನಾಗಿದ್ದು ಅವನು ತನ್ನ ವತಿಯಿಂದ ನನಗೆ ಕೃಪೆಯನ್ನೂ ಪ್ರದಾನ ಮಾಡಿರುವನು. ಆದರೆ ಅದು ನಿಮ್ಮನ್ನು ಕುರುಡರನ್ನಾಗಿ ಸಿತು. ಹೀಗಿರುವಾಗ ನೀವದನ್ನು ಅನಿಷ್ಟಪಡುವ ಸ್ಥಿತಿಯಲ್ಲಿ ನಿಮ್ಮನ್ನು ಅದಕ್ಕೆ ಬಲವಂತ ಎಳೆದು ತರಲು ನನ್ನಿಂದ ಸಾಧ್ಯವೇ?