ನನ್ನ ಜನಾಂಗವೇ, ಭೂಮಿಯಲ್ಲಿ ಮೇಲುಗೈ ಸಾಧಿಸಿದವರು ಎಂಬ ನೆಲೆಯಲ್ಲಿ ಇಂದು ನಿಮಗೆ ಅಧಿಕಾರ ಪ್ರಾಪ್ತವಿದೆ. ಆದರೆ, ಅಲ್ಲಾಹನ ಯಾತನೆ ನಮ್ಮ ಮೇಲೆ ಬಂದು ಬಿಟ್ಟರೆ ಅದರಿಂದ ನಮ್ಮ ನ್ನು ರಕ್ಷಿಸಿ ನೆರವಾಗಬಲ್ಲವರು ಯಾರು?” ಆಗ ಫಿರ್ಔನನು, ‘ನಿಮಗೆ ನಾನು ನನಗೆ ಯುಕ್ತ ಕಂಡ ಮಾರ್ಗವಲ್ಲದೆ ತೋರಿಸಿಕೊಡುತ್ತಿಲ್ಲ. ಸತ್ಪಥಕ್ಕಲ್ಲದೆ ನಾನು ನಿಮಗೆ ಮಾರ್ಗದರ್ಶನ ಮಾಡುತ್ತಿಲ್ಲ’ ಎಂದನು.