ಯಾವುದೇ ವಿಪತ್ತು ಜನರಿಗೆ ತಟ್ಟಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನಲ್ಲಿ ಪ್ರಾರ್ಥಿಸುತ್ತಾರೆ. ನಂತರ ಅವನು ಅವರಿಗೆ ತನ್ನ ಕರುಣೆಯ ರುಚಿಯನ್ನು ಮುಟ್ಟಿಸಿದರೆ ಹಠಾತ್ತನೆ ಅವರಲ್ಲಿ ಒಂದು ವಿಭಾಗವು ನಾವು ಮಾಡಿದ ಉಪಕಾರಕ್ಕೆ ಕೃತಘ್ನತೆ ತೋರಿಸಲಿಕ್ಕಾಗಿ ತಮ್ಮ ಪ್ರಭುವಿನೊಂದಿಗೆ ಇತರ ವಸ್ತುಗಳನ್ನು ಪಾಲು ಸೇರಿಸುತ್ತಾರೆ12. ಆದ್ದರಿಂದ ನೀವು ಸುಖಪಡಿರಿ. ನಂತರ ಅದರ ಪರಿಣಾಮವನ್ನು ತಿಳಿಯಲಿರುವಿರಿ.