(ಓ ಪೈಗಂಬರರೇ,) ಅದೇ ಪ್ರಕಾರ ನಿಮ್ಮನ್ನು ನಾವು ಒಂದು ಸಮುದಾಯಕ್ಕೆ ರಸೂಲರಾಗಿ ಮಾಡಿ ಕಳುಹಿಸಿರುತ್ತೇವೆ. ಅದಕ್ಕೂ ಮುನ್ನ ಅನೇಕ ಸಮುದಾಯಗಳು ಗತಿಸಿ ಹೋಗಿವೆ. ನಾವು ನಿಮಗೆ ದಿವ್ಯಸಂದೇಶವಾಗಿ ಅವತೀರ್ಣ ಗೊಳಿಸುತ್ತಿರುವ ಸಂದೇಶವನ್ನು ಅವರಿಗೆ ಓದಿ ಹೇಳಲಿಕ್ಕಾಗಿ (ನಿಮ್ಮನ್ನು ಕಳುಹಿಸಿದ್ದೇನೆ). ಅವರು ಪರಮ ಕರುಣಾಮಯಿ ಅಲ್ಲಾಹನನ್ನು ನಿಷೇಧಿಸುತ್ತಾರೆ. ಹೇಳಿರಿ, ‘ಅವನೇ ನನ್ನ ಪಾಲಕ ಪ್ರಭು, ಅವನ ಹೊರತು ಆರಾಧ್ಯನಾರೂ ಇಲ್ಲ. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ. ಅವನೆಡೆಗೇ ನನ್ನ ನಿರ್ಗಮನ’.