ತರುವಾಯ ಅವರಿಬ್ಬರೂ (ಕಡಲತೀರದಲ್ಲಿ ನಡೆಯುತ್ತ) ಸಾಗಿದರು. ಕೊನೆಗೆ ಅವರು (ಅಲ್ಲೇ ಹಾದು ಹೋಗುತ್ತಿದ್ದ) ಹಡಗಿಗೆ ಹತ್ತಿದರು. (ನಡು ಗಡಲಿಗೆ ತಲುಪಿದಾಗ) ಆ ವ್ಯಕ್ತಿ ಹಡಗಿನ ಹಲಗೆಯನ್ನು ಕಡಿದು ತೆಗೆದರು. ಆಗ ಮೂಸಾ ಆ ವ್ಯಕ್ತಿಗೆ ಹೇಳಿದರು. ‘ನೀವು ಹಡಗಿನ ಜನರನ್ನು ಮುಳುಗಿಸಿ ಬಿಡಬೇಕೆಂದು ಇದನ್ನು ಕಡಿದು ತೆಗೆದಿರಾ? ನಿಜಕ್ಕೂ ತಾವು ಬಲು ದೊಡ್ಡ ತಪ್ಪನ್ನೇ ಮಾಡಿದಿರಿ’.