ಅವರಲ್ಲೊಂದು ತಂಡವು, ‘ಯಸ್ರಿಬ್ನವರೇ, ನಿಮಗಿನ್ನು ಯಾವುದೇ ನೆಲೆ ಇಲ್ಲ. ಆದ್ದರಿಂದ ಮರಳಿ ಹೋಗಿರಿ’ ಎಂದು ಹೇಳಿದ ಸಂದರ್ಭವೂ ಸ್ಮರಣೀಯ. ಅವರ ಒಂದು ಕೂಟವು, ನಮ್ಮ ಮನೆಗಳು ಅಪಾಯ ಕ್ಕೊಳಗಾಗಿವೆ ಎನ್ನುತ್ತ ತಮ್ಮ ಪ್ರವಾದಿಯಿಂದ (ರಣರಂಗದಿಂದ ಪರಾರಿಯಾಗಲು) ಅನುಮತಿ ಕೇಳಿದರು. ಅವು ನಿಜವಾಗಿ ಅಪಾಯದಲ್ಲಿರಲಿಲ್ಲ. ಆದರೆ ಅವರು ರಣರಂಗದಿಂದ ಪರಾರಿಯಾಗಲು ಬಯಸಿದ್ದರು.