“ಅಲ್ಲಾಹನಿಗಲ್ಲದೆ ಅನ್ಯರಿಗೆ ಆರಾಧಿಸದಿರಿ, ಹೆತ್ತವರೊಡನೆ ಉದಾರಿಗಳಾಗಿರಿ, ಬಂಧುಗಳು, ತಬ್ಬಲಿಗಳು ಹಾಗೂ ಬಡವರಿಗೆ ಉಪಕಾರ ಮಾಡಿರಿ, ಜನರೊಡನೆ ಹಿತವಾಗಿ ನುಡಿಯಿರಿ, ನಮಾಝ್ ಸ್ಥಿರಗೊಳಿಸಿರಿ, ಝಕಾತ್ ಪಾವತಿಸಿರಿ” ಎಂದು ನಾವು ಇಸ್ರಾಈಲ್ ಸಂತತಿಗಳಿಂದ ಪ್ರತಿಜ್ಞೆ ಪಡೆದ ಸಂದರ್ಭ(ವನ್ನು ಸ್ಮರಿಸಿರಿ). ಆದರೆ ನಿಮ್ಮ ಪೈಕಿ ಕೆಲವರ ಹೊರತು ನೀವೆಲ್ಲರೂ ನಿರ್ಲಕ್ಷ್ಯ ವಹಿಸುತ್ತಾ ವಿಮುಖರಾದಿರಿ.