ಅಪರಾಧಿಗಳು ತಮ್ಮ ಪ್ರಭುವಿನ ಮುಂದೆ ತಲೆ ತಗ್ಗಿಸಿ ನಿಂತಿರುವ ಸಂದರ್ಭವನ್ನು ನೀವು ನೋಡುತ್ತಿದ್ದರೆ, (ಆಗ ಅವರು ಹೇಳುವರು), “ನಮ್ಮ ಪ್ರಭೂ, (ನಾವು ನಿಷೇಧಿಸಿದ್ದನ್ನು) ನಾವು ಕಣ್ಣಾರೆ ಕಂಡೆವು ಮತ್ತು ಕೇಳಿದೆವು. ಆದ್ದರಿಂದ ನಮ್ಮನ್ನು (ಇಹಲೋಕಕ್ಕೆ) ಸತ್ಕರ್ಮವೆಸಗಲಿಕ್ಕಾಗಿ ಮರಳಿ ಕಳುಹಿಸಿಕೊಡು. ಈಗ ನಾವು ದೃಢವಾಗಿ ನಂಬಿದ್ದೇವೆ’’.