ಓರ್ವನು, ತನ್ನ ಮಾತಾಪಿತರೊಡನೆ ‘ಛೀ, ನೀವಿ ಬ್ಬರ ಕಾರ್ಯ ಕಷ್ಟ. ನನ್ನನ್ನು (ಮರಣಾನಂತರ ಗೋರಿಯಿಂದ) ಹೊರತರಲಾಗುವುದು ಎಂದು ನೀವು ನನ್ನನ್ನು ಹೆದರಿಸುತ್ತಿರುವಿರಾ? ವಸ್ತುತಃ ನನಗಿಂತ ಮುಂಚೆ ಅನೇಕ ವಂಶಗಳು ಗತಿಸಿವೆ. (ಅವರಾರೂ ಈ ತನಕ ಹೊರಬಂದಿಲ್ಲ)’ ಎಂದನು. ಅವನ ಮಾತಾಪಿತರು ಅಲ್ಲಾಹನಲ್ಲಿ ಸಹಾಯ ಬೇಡುತ್ತ, ‘ನಿನಗೆ ನಾಶ! ನೀನು ನಂಬಿಕೋ, ಅಲ್ಲಾಹನ ವಾಗ್ದಾನವು ಸತ್ಯವಾ ದುದು’ ಎನ್ನುತ್ತಾರೆ. ಆದರೆ ಅವನು, ‘ಇವೆಲ್ಲ ಪ್ರಾಚೀನರ ಕಟ್ಟುಕತೆಗಳಾಗಿವೆ’ ಎನ್ನುತ್ತಾನೆ.